Tuesday, 26 March 2013

ಡಿ.ವಿ.ಗುಂಡಪ್ಪ: ಸಂಗ್ರಹ

ಡಿ.ವಿ.ಗುಂಡಪ್ಪ

ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.

ಪರಿವಿಡಿ

[ಅಡಗಿಸು]

[ಬದಲಾಯಿಸಿ] ಶಿಕ್ಷಣ

ಡಿ ವಿ ಜಿ ಅವರು ೧೮೮೭, ಮಾರ್ಚ್ ೧೭ ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು.

[ಬದಲಾಯಿಸಿ] ವೃತ್ತಿ ಜೀವನ

ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು.

[ಬದಲಾಯಿಸಿ] ಪತ್ರಿಕೋದ್ಯಮ

ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು "ಸೂರ್ಯೋದಯ ಪ್ರಕಾಶಿಕ" ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್ರಿಕೆ ನಡೆಯಲಿಲ್ಲ. ಪುನಃ ಮತ್ತೊಂದಕ್ಕೆ ಗುಂಡಪ್ಪನವರ ಹೆಜ್ಜೆ, ಖರ್ಚಿಗಾಗಿ ಏನಾದರೂ ಬರೆಯಬೇಕಿತ್ತು. ಯಾವುದಾದರೂ ಪತ್ರಿಕೆ ಬೇಕಿತ್ತು. ಹಲವಾರು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆದರು. ಕನ್ನಡ ಪತ್ರಿಕೆಗಳಲ್ಲಿ ಅನುಭವ ಪಡೆದರು. "ವೀರಕೇಸರಿ" ಯಲ್ಲಿ ಕಾರ್ಯ ನಿರ್ವಹಿಸಲು ಮದ್ರಾಸ್ ಗೆ ಹೋದಾಗ ಅಲ್ಲಿ "ಹಿಂದೂ" ಪತ್ರಿಕೆಗೆ ಬರೆದರು. ನಂತರ "ಮೈಸೂರು ಟೈಮ್ಸ್" ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು.

[ಬದಲಾಯಿಸಿ] ಸಾಹಿತ್ಯ

ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷ್ ನಲ್ಲಿ ಬರೆದ ಲೇಖನ ಡಿ ವಿ ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಲೇಖನ, ಪರಿಚಯದ ಜೊತೆ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿ ವಿ ಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.
ಕನ್ನಡ ಕಾವ್ಯಕ್ಷೇತ್ರದಲ್ಲಿ "ಮಂಕುತಿಮ್ಮನ ಕಗ್ಗ" ಹಾಗೂ "ಮರುಳ ಮುನಿಯನ ಕಗ್ಗ" ದ ಮೂಲಕ ಡಿ ವಿ ಜಿ ಮನೆಯ ಮಾತಾದವರು:
"ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು -- ಮಂಕುತಿಮ್ಮ ||"
ಈ ಕೃತಿ ಕನ್ನಡದ ಭಗವದ್ಗೀತೆಯೆಂದೇ ಹಲವರು ಭಾವಿಸುವಂತಹ ಉತ್ಕೃಷ್ಟ ಸಂಕಲನ. "ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು" ಎಂದ ಡಿ ವಿ ಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು. ಹಳೆಯದನ್ನು ಬಿಡಲಾರದ ಹೊಸತು ವಿಜ್ಞಾನ ಸೃಷ್ಟೀಕರಿಸಲಾಗದ ಭಾರತೀಯ ಮನಸ್ಸುಗಳನ್ನು ಒಂದಾಗಿಸುವ ವಿಚಾರಲಹರಿಯನ್ನು ಕಾವ್ಯ ಮುಖೇನ ನೀಡಿದ ಡಿ ವಿ ಜಿ ಪತ್ರಕರ್ತರಾಗಿಯೂ ಹೆಸರಾದವರು. ವ್ಯಕ್ತಿ ವಿಚಾರದ ಬರಹಗಳಿಂದ ನಾಲ್ಕು ಕಾಲ ನೆನಪಲ್ಲಿರುವವರು. ಹೀಗಾಗಿ ಅವರ "ಮಹನೀಯರು", "ಜ್ಞಾಪಕ ಚಿತ್ರಶಾಲೆ" ಮಹತ್ವದ ವಿಚಾರಗಳನ್ನು ಹೊರಚೆಲ್ಲಿದ ಕೃತಿಗಳು.
ಡಿ ವಿ ಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ. ಡಿ ವಿ ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು "ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ" ಎಂದಿದ್ದಾರೆ.
ಕರ್ನಾಟಕ ಸರ್ಕಾರ ಡಿ ವಿ ಜಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಯೋಜನೆ ಹಮ್ಮಿಕೊಂಡಿದೆ. ಈ ಪ್ರಕಾರ "ಡಿ ವಿ ಜಿ ಕೃತಿ ಶ್ರೇಣಿ"ಯಲ್ಲಿ ವಿಚಾರ, ವಿಮರ್ಶೆ, ನಾಟಕ, ಶಿಶು ಸಾಹಿತ್ಯ, ಜೀವನ ಚರಿತ್ರೆಗಳು, ಕಾವ್ಯ ೧-೨, ನೆನಪಿನ ಚಿತ್ರಗಳು, ಸಂಕೀರ್ಣ ಹೊರತಂದಿದೆ.
ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಬಿ ಜಿ ಎಲ್ ಸ್ವಾಮಿ, ಡಿ ವಿ ಜಿ ಅವರ ಪುತ್ರರು. ತಮ್ಮ ಜೀವನ ಅಂತ್ಯದ ವರೆಗೂ ಮದರಾಸಿನಲ್ಲೇ ಕಾಲ ಕಳೆದ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರರು.

[ಬದಲಾಯಿಸಿ] ಗೌರವಗಳು / ಪ್ರಶಸ್ತಿಗಳು

ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ೧೯೬೧ ರಲ್ಲಿ ಡಿ ವಿ ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ ವಿ ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ. ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು.

[ಬದಲಾಯಿಸಿ] ನಿಧನ

೧೯೭೫ಅಕ್ಟೋಬರ್ ೭ ರಂದು ಡಿ ವಿ ಜಿ ನಿಧನರಾದರು.

[ಬದಲಾಯಿಸಿ] ಗುಂಡಪ್ಪನವರ ಸಮಗ್ರ ಸಾಹಿತ್ಯ

[ಬದಲಾಯಿಸಿ] ಕವಿತೆ

  • ನಿವೇದನ
  • ಉಮರನ ಒಸಗೆ
  • ಮಂಕುತಿಮ್ಮನ ಕಗ್ಗ - I
  • ಮರುಳ ಮುನಿಯನ ಕಗ್ಗ - II
  • ಶ್ರೀರಾಮ ಪರೀಕ್ಷಣಂ
  • ಅ೦ತಃ ಪುರಗೀತೆ
  • ಗೀತ ಶಾಕುಂತಲಾ

[ಬದಲಾಯಿಸಿ] ನಿಬಂಧ

  • ಜೀವನ ಸೌಂದರ್ಯ ಮತ್ತು ಸಾಹಿತ್ಯ
  • ಸಾಹಿತ್ಯ ಶಕ್ತಿ
  • ಸಂಸ್ಕೃತಿ
  • ಬಾಳಿಗೊಂದು ನಂಬಿಕೆ

[ಬದಲಾಯಿಸಿ] ನಾಟಕ

  • ವಿದ್ಯಾರಣ್ಯ ವಿಜಯ
  • ಜಾಕ್ ಕೇಡ್
  • ಮ್ಯಾಕ್ ಬೆಥ್

Thursday, 21 March 2013

ಹಾಡಿನ ಹುಟ್ಟು : ಸ್ನೇಹಿತರಿಂದ ಸಂಗ್ರಹ

ಮೂರು ದಿನಗಳಲ್ಲೂ ಹೊಳೆಯದ ಹಾಡು ಮೂರೇ ನಿಮಿಷದಲ್ಲಿ ಬರೆಸಿಕೊಂಡಿತು!

sat1
ಚಿತ್ರ: ಓಹಿಲೇಶ್ವರ. ಗೀತೆ ರಚನೆ: ವಿಜಯನಾರಸಿಂಹ.
ಸಂಗೀತ: ಜಿ.ಕೆ. ವೆಂಕಟೇಶ್. ಗಾಯನ : ಘಂಟಸಾಲ
ಹೇ ಶಂಕರಾ…. ದಯಾನಿಧೇ…
ಈ ದೇಹದಿಂದ ದೂರನಾದೆ ಏಕೆ ಆತ್ಮನೇ
ಈ ಸಾವು ನ್ಯಾಯವೇ… ಈ ಸಾವು ನ್ಯಾಯವೇ
ಆಧಾರ ನೀನೆಂದು ಈ ಲೋಕ ನಂಬಿದೇ ಐಐಪಐಐ
ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೇ?
ಕಾವದೇವ ಸಾವುತರಲು ಎಲ್ಲಿ ರಕ್ಷಣೇ
ಯಾವ ಪಾಪಕೇ-ಸಾವು ಕಾಡಿತೋ
ಪರಮಾತ್ಮ ನ್ಯಾಯ ಬೇಡವೆ?
ಈ ಸಾವು ನ್ಯಾಯವೆ, ಈ ಸಾವು ನ್ಯಾಯವೆ? ಐಐ೧ಐಐ
ಸೇವೆಗಾಗಿ ಕಾದ ಹೂವು ಕಸವ ಸೇರಿತೇ
ಬಾಳಿನಾಸೆ ಚಿಗುರಿನಲ್ಲೆ ಬಾಡಿಹೋಯಿತೇ
ಏನು ತಪ್ಪಿದೆ-ಹೇಳಬಾರದೆ
ಸರಿಯೇನು-ಮೌನವೇಕಿದು?
ಈ ಸಾವು ನ್ಯಾಯವೆ, ಈ ಸಾವು ನ್ಯಾಯವೆ? ಐಐ೨ಐಐ
ಶಿವನಾಮ ಮಂತ್ರವೊಂದೆ ಅಮರದೀವಿಗೇ
ಪರಮೇಶ ಪ್ರಾಣಜ್ಯೋತಿ ಮರಳಿ ತಾರೆಯಾ
ಮರಳಿ ತಾರೆಯಾ… ಮರಳಿ ತಾರೆಯಾ
ಈ ಸಾವು ನ್ಯಾಯವೇ, ಈ ಸಾವು ನ್ಯಾಯವೆ? ಐಐ೩ಐಐ
ಮೊದಲ ಯತ್ನದಲ್ಲೇ ಯಶಸ್ಸು ಪಡೆಯುವುದು, ಜನಪ್ರಿಯತೆ ಗಳಿಸುವುದು ಬಹುಕಷ್ಟ. ಅಷ್ಟೇ ಅಲ್ಲ, ಹಾಗೆ ಪಡೆದ ಯಶಸ್ಸಿಗೆ ಜವಾಬ್ದಾರಿ ಹೆಚ್ಚು. ಮುಂದಿನ ಸಾಹಸಕ್ಕೆ ಕೈ ಹಾಕಲು ಹಿಂದಿನ ಯಶಸ್ಸು ಸೂರ್ತಿ ಕೊಡುವಂತೆಯೇ ಹೊರೆಯನ್ನೂ ಹೆಚ್ಚಿಸುತ್ತದೆ. ಹೀಗಾಗಿ ಪಡೆದ ಯಶಸ್ಸನ್ನು ಕಾಪಾಡಿಕೊಳ್ಳುವುದು ತುಂಬಾ ಪರಿಶ್ರಮದ ಕಾರ್ಯ. ಇದೊಂದು ರೀತಿಯಲ್ಲಿ-ಪ್ರೇಮಿಸುವುದು ಸುಲಭ, ಅದನ್ನು ಉಳಿಸಿಕೊಳ್ಳುವುದು ಕಠಿಣ! ಗಳಿಸಿದ್ದು ಹೆಚ್ಚಲ್ಲ, ಅದನ್ನು ಉಳಿಸಿಕೊಳ್ಳುವುದೇ ಹೆಚ್ಚು ಎಂಬ ಮಾತಿನಂತೆ !
ಬರೆದ ಮೊದಲ ಹಾಡಿನಿಂದಲೇ (ಅದೇ ಈ ಅಂಕಣದಲ್ಲಿ ಪ್ರಸ್ತಾಪವಾಗಿರುವ `ಈ ದೇಹದಿಂದ ದೂರನಾದೆ ಏಕೆ ಆತ್ಮನೆ’…) ಯಶಸ್ಸಿನ ರುಚಿ ಕಂಡ ವ್ಯಕ್ತಿ ವಿಜಯನಾರಸಿಂಹ. ಈತ, ಮಂಡ್ಯ ಜಿಲ್ಲೆ, ಮೇಲುಕೋಟೆ ಸಮೀಪದ ಹಳೇಬೀಡು ಎಂಬ ಹಳ್ಳಿಯವರು. ಚಿಕ್ಕಂದಿನಿಂದಲೇ ನಾಟಕ-ಕಾದಂಬರಿ ಬರೆವ ಗೀಳು ಅಂಟಿಸಿಕೊಂಡ ವಿಜಯನಾರಸಿಂಹ, ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿದ್ದ ಪು.ತಿ.ನ ಗೋಪಾಲ ಕೃಷ್ಣ ಅಡಿಗರಂಥ ಸಾಹಿತಿಗಳ ನಿಕಟವರ್ತಿಯಾಗಿದ್ದವರು. ಕೆಲವು ಕಾಲ ಪತ್ರ ಕರ್ತರಾಗಿಯೂ ದುಡಿದದ್ದು ಅವರ ಹೆಚ್ಚುಗಾರಿಕೆ. ಭಕ್ತಿಗೀತೆಗಳಲ್ಲಿ ಇವತ್ತಿಗೂ ನಂಬರ್ಒನ್ ಎನಿಸಿಕೊಂಡಿರುವ `ಗಜಮುಖನೆ ಗಣಪತಿಯೆ ನಿನಗೆ ವಂದನೆ’ಯನ್ನು ಬರೆದವರು ಇದೇ ವಿಜಯನಾರಸಿಂಹ.
೧೯೫೬ರಲ್ಲಿ, ಅಂದರೆ ೫೩ವರ್ಷಗಳ ಹಿಂದೆ `ಓಹಿಲೇಶ್ವರ’ ಚಿತ್ರಕ್ಕೆ ಹಾಡು ಬರೆಯುವ ಮೂಲಕ ಚಿತ್ರರಂಗಕ್ಕೆ ಬಂದವರು ವಿಜಯನಾರಸಿಂಹ. ಅವರನ್ನು ಕರೆತಂದು ಹಾಡು ಬರೆಯಲು ಕೂರಿಸಿದವರು-ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್. ವಿಜಯನಾರಸಿಂಹರ ಚೊಚ್ಚಲು ಗೀತೆಯಾದ `ಈ ದೇಹದಿಂದ ದೂರನಾದೆ ಏಕೆ ಆತ್ಮನೆ’ ಹಾಡು ಅಪಾರ ಜನಪ್ರಿಯತೆ ಪಡೆಯಿತು. ಇಂದಿಗೂ ಈ ಹಾಡು ಆಕಾಶವಾಣಿಯ ಮೆಚ್ಚಿನ ಚಿತ್ರಗೀತೆಯಾಗಿ ಪ್ರಸಾರವಾಗುವುದು ಮಾತ್ರವಲ್ಲದೆ, ಬಸ್ಸ್ಟ್ಯಾಂಡ್ಗಳಲ್ಲಿ ಹೊಸ ತಲೆಮಾರಿನ ಭಿಕ್ಷುಕರ ಕಂಠದಿಂದಲೂ ಹೊಮ್ಮುವುದು ಅದರ ಜನಪ್ರಿಯತೆಯನ್ನು ತಿಳಿಸುತ್ತದೆ.
`ಓಹಿಲೇಶ್ವರ’ದ ನಂತರ ವಿಜಯನಾರಸಿಂಹ ಹಿಂತಿರುಗಿ ನೋಡಲಿಲ್ಲ. ಅದರಲ್ಲೂ ಪುಟ್ಟಣ್ಣ ಕಣಗಾಲ್ ಅವರ ಎಲ್ಲ ಚಿತ್ರಗಳಲ್ಲೂ ವಿಜಯನಾರಸಿಂಹ ಕಡ್ಡಾಯ ಎಂಬಂತೆ ಹಾಡು ಬರೆದರು. ನಾಗರಹಾವು ಚಿತ್ರದ-`ಹಾವಿನ ದ್ವೇಷ ಹನ್ನೆರಡು ವರುಷ,’ `ಬಾರೇ ಬಾರೇ ಚೆಂದದ ಚೆಲುವಿನ ತಾರೆ,’ `ಶರಪಂಜರ’ದ `ಹದಿನಾಲ್ಕು ವರ್ಷ ವನವಾಸದಿಂದ’ `ಸಂದೇಶ ಮೇಘ ಸಂದೇಶ’ `ಗೆಜ್ಜೆಪೂಜೆ’ಯ ` ಪಂಚಮವೇದ ಪ್ರೇಮದ ನಾದ’; ಎಡಕಲ್ಲು ಗುಡ್ಡದ ಮೇಲೆ ಚಿತ್ರದ `ವಿರಹಾ ನೂರು ನೂರು ತರಹಾ’ `ನಿಲ್ಲು ನಿಲ್ಲೇ ಪತಂಗ’ `ಧರ್ಮಸೆರೆ’ಯ `ಈ ಸಂಭಾಷಣೆ, ನಮ್ಮ ಈ ಪ್ರೇಮ ಸಂಭಾಷಣೆ…` ` ಬಿಳೀ ಹೆಂಡ್ತಿಯ ` ಆ ದೇವರೆ ನುಡಿದಾ ಮೊದಲ ನುಡಿ` `ಉಪಾಸನೆ’ಯ `ಭಾರತ ಭೂಶಿರ ಮಂದಿರ ಸುಂದರಿ….’ ಹೀಗೆ, ವಿಜಯನಾರಸಿಂಹ ಸೃಷ್ಟಿಸಿದ ಜನಪ್ರಿಯ ಹಾಡುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
***
ಇಂಥ ಹಿನ್ನೆಲೆಯ ವಿಜಯ ನಾರಸಿಂಹ, ಓಹಿಲೇಶ್ವರ ಚಿತ್ರಕ್ಕೆ ` ಈ ದೇಹದಿಂದ ದೂರನಾದೆ ಏಕೆ ಆತ್ಮನೆ` ಹಾಡು ಬರೆದವರಲ್ಲ? ಆ ಹಾಡಿನ ಸೃಷ್ಟಿಗೆ ಕಾರಣವಾದ ಸಂದರ್ಭದ್ದೇ ಒಂದು ಚೆಂದದ ಕಥೆ.
ಆ ಚಿತ್ರದಲ್ಲಿ ನಾಯಕ ಶಿವಭಕ್ತ. ಆತನ ತಂಗಿ, ಚಿಕ್ಕ ವಯಸ್ಸಿನಲ್ಲೇ ಆಕಸ್ಮಿಕವಾಗಿ, ಅದೂ ಕಾಡಿನಲ್ಲಿ ಸತ್ತುಹೋಗುತ್ತಾಳೆ. ಆಕೆಯ ಶವವನ್ನು ಎರಡೂ ಕೈಗಳಲ್ಲಿ ಎತ್ತಿಕೊಂಡು ಆ ಕಾಡಲ್ಲಿದ್ದ ಶಿವ ದೇವಾಲಯದ ಮುಂದೆ ನಿಂತು `ನನ್ನ ತಂಗಿಯ ಪ್ರಾಣವನ್ನು ಇಷ್ಟು ಬೇಗ ಏಕೆ ಕೊಂಡೊಯ್ದೆ ಭಗವಂತಾ’ ಎಂದು ನಾಯಕ ಸಂಕಟದಿಂದ ಹಾಡಬೇಕು… ಈ ಸನ್ನಿವೇಶಕ್ಕೆ ಹೊಂದುವಂಥ ಹಾಡು ಬೇಕು…
ಈ ಸಂದರ್ಭ ವಿವರಿಸಿದ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಒಂದು ಟ್ಯೂನ್ ಕೇಳಿಸಿ `ವಿಜಯ ನಾರಸಿಂಹಾ, ಈ ಟ್ಯೂನ್ಗೆ ಹೊಂದುವಂಥ ಹಾಡು ಬರೆದುಕೊಡಯ್ಯಾ’ ಎಂದರು. ಹಾಡು ಬರೆಯುವ ಉದ್ದೇಶದಿಂದಲೇ ಮದ್ರಾಸಿನ ಹೋಟೆಲೊಂದರಲ್ಲಿ ರೂಂ ಮಾಡಿದ್ದೂ ಆಯಿತು.
ಹೇಳಿ ಕೇಳಿ ಮೊದಲ ಸಿನಿಮಾ. ಮೊದಲ ಹಾಡು. ಅದೇ ಕಾರಣಕ್ಕೋ ಏನೋ ವಿಜಯನಾರಸಿಂಹ ಅವರಿಗೆ, ತಕ್ಷಣಕ್ಕೆ ಹಾಡು ಹೊಳೆಯಲೇ ಇಲ್ಲ. ಹೀಗೇ ಮೂರು ದಿನಗಳು ಕಳೆದು ಹೋದವು. ನಾಲ್ಕನೇ ದಿನ ಪಟ್ಟಾಗಿ ತಿಂಡಿ ತಿಂದದ್ದಾಯಿತು. ನಂತರ ಹಾಡು ಬರೆಯಲು ಕೂತರೆ, ಆಗಲೂ ಹಾಡು ಹೊಳೆಯಲಿಲ್ಲ.
ತಕ್ಷಣ ಮೇಲೆದ್ದ ಜಿ.ಕೆ. ವೆಂಕಟೇಶ್-`ನಾನು ಒಂದು ಸಿಗರೇಟ್ ಸೇದಿಕೊಂಡು ಐದು ನಿಮಿಷ ಅಡ್ಡಾಡಿಕೊಂಡು ಬರ್ತೇನೆ. ನೀನು ಹಾಡು ಬರೀತಾ ಇರು’ ಎಂದು ಹೇಳಿ ಹೊರಗೆ ಬಂದರು. ಇತ್ತ, ಏನು ಬರೆಯಲಿ ಎಂದು ಯೋಚಿಸುತ್ತ ಕುಳಿತ ವಿಜಯನಾರಸಿಂಹ ಅವರಿಗೆ, ಕುಳಿತಲ್ಲೇ ನಿದ್ರೆ ಆವರಿಸಿತು. ತಿರುಗಿ ಬಂದ ಜಿ.ಕೆ. ವೆಂಕಟೇಶ್,-`ವಿಜಯಾ, ಏನೋ ಇದೂ ?’ ಎಂದರು. ಇವರಿಗೆ ಎಚ್ಚರವಾಗಲಿಲ್ಲ. ತಕ್ಷಣವೇ ಮೈಮುಟ್ಟಿ, ಮೆಲ್ಲಗೆ ತಟ್ಟಿ ಎಬ್ಬಿಸಿದ ವೆಂಕಟೇಶ್-`ಏನೋ ಇದೂ? ಒಳ್ಳೇ ಹೆಣ ಬಿದ್ದಂಗೆ ಬಿದ್ದದೀಯಲ್ಲೋ’ ಎಂದು ಛೇಡಿಸಿದರು. ಹಿಂದೆಯೇ -`ನಿನ್ನ ದೇಹ ಮಾತ್ರ ಇಲ್ಲಿದೆ. ಒಳಗಿನ ಚೈತನ್ಯ ಎಲ್ಲಿಗೆ ಹೋಯ್ತಯ್ಯಾ’ ಎಂದು ಪ್ರಶ್ನಿಸಿದರು.
ಕಡೆಯ ಮಾತು ಕೇಳುತ್ತಿದ್ದಂತೆಯೇ ವಿಜಯ ನಾರಸಿಂಹ ಅವರ ಕಂಗಳು ಮಿನುಗಿದವು. ಅವರು ಸಡಗರದಿಂದ ಪ್ಯಾಡ್ ಎತ್ತಿಕೊಂಡು-`ಸಾರ್, ಹಾಡಿನ ಸಾಲು ಹೊಳೆಯಿತು. ಮೂರು ನಿಮಿಷ ತಡೀರಿ, ಬರೆದು ಬಿಡ್ತೀನಿ’ ಎಂದವರೇ `ದೇಹ ಮಾತ್ರ ಇಲ್ಲಿದೆ, ಒಳಗಿನ ಚೈತನ್ಯ ಎಲ್ಲಿಗೆ ಹೋಯ್ತೋ’ ಎಂಬ ಸಾಲನ್ನೇ ಬೇಸ್ ಮಾಡಿಕೊಂಡು ` ಈ ದೇಹದಿಂದ ದೂರನಾದೆ ಏಕೆ ಆತ್ಮನೆ…’ ಹಾಡನ್ನು ಕೇವಲ ಮೂರೇ ನಿಮಿಷಗಳಲ್ಲಿ ಬರೆದು ಬಿಟ್ಟರು ! ಬರೆದೇ ಬಿಟ್ಟರು; ಕೇವಲ ಮೂರೇ ನಿಮಿಷಗಳಲ್ಲಿ !
ಅದಕ್ಕೇ ಹೇಳಿದ್ದು: ಪ್ರತಿಯೊಂದು ಮಧುರಗೀತೆಯ ಹಿಂದೆ ಅಷ್ಟೇ ಮಧುರವಾದ ಒಂದು ಕಥೆಯಿರುತ್ತದೆ. ಈ ಮಾತು ಎಷ್ಟೊಂದು ಸತ್ಯ, ಅಲ್ಲವೆ?


ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಆಯೋಗಗಳು : ಸ್ಪರ್ಧಾರ್ಥಿಯಿಂದ ಸಂಗ್ರಹಿತ ಮಾಹಿತಿ


: ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಆಯೋಗಗಳು / ವರದಿಗಳು :



ಕ್ರ.
ಸಂ.
ಆಯೋಗ
ಉದ್ದೇಶ
ಅಧ್ಯಕ್ಷರು
ಸ್ಥಾಪನೆಯಾದ
ವರ್ಷ
ವರದಿ
ನೀಡಿದ
ವರ್ಷ
ಖರ್ಚು
ಮಾಡಿದ
ಹಣ
 1
ಗೋಕಾಕ್ ವರದಿ
ಶಾಲಾ ಶಿಕ್ಷಣದಲ್ಲಿ  ಕನ್ನಡದ ಸ್ಥಾನಮಾನ
ವಿ.ಕೃ.ಗೋಕಾಕ್



 2
ಎಚ್ಚೆನ್ ವರದಿ
ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ
ಎಚ್.ನರಸಿಂಹಯ್ಯ



 3
ನಾರಾಯಣಸ್ವಾಮಿ ವರದಿ
ಆಡಳಿತದಲ್ಲಿ ಕನ್ನಡ ಅನುಷ್ಠಾನ ರೀತಿ




 4
ಮಹಿಷಿ ವರದಿ
ಕನ್ನಡಿಗರಿಗೆ ಉದ್ಯೋಗಾವಕಾಶ
ಸರೋಜಿನಿ ಮಹಿಷಿ



 5
ಉದ್ಯೋಗ ಸಮಿತಿ ವರದಿ
ಮಹಿಷಿ ವರದಿ ಪರಿಷ್ಕರಣೆ




 8
ಒಡೆಯರ್ ವರದಿ
ಕನ್ನಡ ವಿ.ವಿ. ಸ್ವರೂಪ ನಿರ್ಧಾರ




 9
ಅಹುಜಾ ಸಮಿತಿ
ಕಾವೇರಿ ನದಿ ನೀರಿನ ಬಳಕೆ




 7
ಬಚಾವತ್ ವರದಿ
ಕೃಷ್ಣಾ ನದಿ ನೀರಿನ ಹಂಚಿಕೆ




 8






 9
ನಂಜುಂಡಪ್ಪ ವರದಿ
ಪ್ರಾದೇಶಿಕ ಅಸಮಾನತೆ ನಿವಾರಣೆ




 10
ವೀರಪ್ಪ ಮೊಯಿಲಿ ವರದಿ
 ಕರ್ನಾಟಕರಾಜ್ಯ ತೆರಿಗೆ ಸುಧಾರಣೆ
ವೀರಪ್ಪ ಮೊಯಿಲಿ



 11
ನಾರಾಯಣಮೂರ್ತಿ ವರದಿ
ಮಾಹಿತಿ ತಂತ್ರಜ್ಞಾನ ಕಾರ್ಯಪಡೆ
ನಾರಾಯಣಮೂರ್ತಿ



 12
ಕಿರಣ್ ಮಜುಂದಾರ್ ವರದಿ
ಜೈವಿಕ ತಂತ್ರಜ್ಞಾನ ಕಾರ್ಯಪಡೆ
ಕಿರಣ್ ಮಜುಂದಾರ್ ಷಾ



 13
ಹಾರನಹಳ್ಳಿರಾಮಸ್ವಾಮಿ ವರದಿ
ರಾಜ್ಯ ಆಡಳಿತ ಸುಧಾರಣೆ
ಹಾರನಹಳ್ಳಿರಾಮಸ್ವಾಮಿ



 14
L.G.ಹಾವನೂರು ವರದಿ
ಹಿಂದುಳಿದ ವರ್ಗ ಅಭಿವೃದ್ಧಿ
L.G.ಹಾವನೂರು



 15
ವೆಂಕಟಸ್ವಾಮಿ ಆಯೋಗ
ಹಿಂದುಳಿದ ವರ್ಗ ಪಟ್ಟಿ ಪುನರ್ ಪರಿಶೀಲನೆ

1985


 16
ಕಾಕಾ ಕಾಲೇಕರ್ ಆಯೋಗ





 17
ಕರ್ನಾಟಕ ಭೂಸುಧಾರಣಾ ಆಯೋಗ

ಬಿ.ಡಿ.ಜತ್ತಿ



 18
ಲೆಸ್ಲಿ ಮಿಲ್ಲರ್ ಆಯೋಗ
ಹಿಂದುಳಿದವರಿಗೆ ಮೀಸಲಾತಿ
ಲೆಸ್ಲಿ ಮಿಲ್ಲರ್
1918


 19
ಚನ್ನಪ್ಪ ರೆಡ್ಡಿ ಆಯೋಗ
ಹಿಂದುಳಿದವರಿಗೆ ಮೀಸಲಾತಿ
ಚನ್ನಪ್ಪ ರೆಡ್ಡಿ
1990


 20
R.ನಾಗಣ್ಣ ಆಯೋಗ
ಹಿಂದುಳಿದವರಿಗೆ ಮೀಸಲಾತಿ
R.ನಾಗಣ್ಣ
1961


 21
A.D.ಗೊರವಾಲ ಸಮಿತಿ
ಆಡಳಿತ ಸುಧಾರಣಾ ಆಯೋಗ
A.D.ಗೊರವಾಲ
1957

ನಮ್ಮ ಅಂಬಿಕಾತನಯದತ್ತ


  ಗರಿ: ಬೇಂದ್ರೆ

ಬೆಳಗು

ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ
ನುಣ್ಣ್-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾತೊಯ್ದಾ
ರತ್ನದರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು
ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂದವು-ಅಮೃತsದ ಬಿಂದು
ಯಾರಿರಿಸಿದವರು ಮುಗಿಲsಮೇಲಿಂ-
ದಿಲ್ಲಿಗೇ ತಂದು
ಈಗ -ಇಲ್ಲಿಗೇ ತಂದು
ತಂಗಾಳೀಯ ಕೈಯೊಳಗಿರಿಸೀ
ಎಸಳೀನಾ ಚವರೀ
ಹೂವಿನ-ಎಸಳೀನಾ ಚವರಿ
ಹಾರಿಸಿ ಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ
ಗಿಡಗಂಟೆಯಾ ಕೊರಳೊಳಗಿಂದ
ಹಕ್ಕಿಗಲಾ ಹಾಡು
ಹೊರಟಿತು-ಹಕ್ಕಿಗಳಾ ಹಾಡು
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ
ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣ
ಕಣ್ಣಿದೆ-ಕಾಣsದೋ ಬಣ್ಣ
ಶಾಂತಿರಸವೇ ಪ್ರೀತಿಯಿಂದಾ
ಮೈದೋರಿತಣ್ಣ
ಇದು ಬರಿ-ಬೆಳಗಲ್ಲೋ ಅಣ್ಣಾ

ರಾಗರತಿ

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
-ಆಗ- ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಹಾಳಿಗೆ ಮೇಲಕೆದ್ದಿತ್ತs
ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗೆ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳು ಮಲ್ಲಿಗೀ ಜಾಳಿಗೆ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.
ಬೊಗಸಿ ಕಣ್ಣಿನಾ ಬಯಸೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.
ಮಳ್ಳುಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತಮತ ಬೆಡಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮರ ಮರತಿತ್ತ.

ಯುಗಾದಿ

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿ ಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸು
ಜೀವ ಕಳೆಯ ತರುತಿದೆ.
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಳು ಕೋದಿದೆ.
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

ಕನಸಿನೊಳಗೊಂದು ಕಣಸು

ಕನಸಿನೊಳಗೊಂದು ಕಣಸು
(ತಾಯಿ-ಮಕ್ಕಳ ಸಂವಾದ)
(ಗರಿ – ಕವನ ಸಂಗ್ರಹ)
“ಯಾರು ನಿಂದವರಲ್ಲಿ ತಾಯಿ” ಎಂದೆ
“”ಯಾರು ಕೇಳುವರೆನಗೆ, ಯಾಕೆ ತಂದೆ?”
“ಬೇಸರದ ದನಿಯೇಕೆ ಹೆಸರ ಹೇಳಲ್ಲ”
“ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ”
“ನೀನಾರ ಮನೆಯಳೊ ಮುತ್ತೈದೆ ಹೇಳು”
“ನಾನಾರ ಮನೆಯವಳೊ ಬಯಲನ್ನೆ ಕೇಳು”
ಆಪ್ತರಿಲ್ಲವೆ ನಿನಗೆ ಇಷ್ಟರಲ್ಲೇ?”
ಗುಪ್ತರಾದರೊ ಏನೊ ಇಷ್ಟರಲ್ಲೇ”
“ಇರುವರೇ ಇದ್ದರೇ ಮಕ್ಕಳೆಂಬವರು?”
“ಇರುವರೆಂದರು ಕೂಡ ಯಾರು ನಂಬುವರು?”
“ಮನೆಯಿಲ್ಲವೇ ಇರಲು ಪರದೇಶಿಯೇನು?”
“ಮನೆಯೆ ಮುನಿದೆದ್ದಿರಲು ಯಾ ದೇಶವೇನು?”
“ನಿನ್ನ ಮಾತಿನಲಿಹುದು ಒಡಪಿನಂದ”
“ನನ್ನ ಹತ್ತಿರದೊಂದೆ ಉಳಿದಿಹುದು ಕಂದ”
“ರಾಜಮುಖಿ ನಿನ್ನಲ್ಲಿ ರಾಜಕಳೆಯಿಹುದು!”
“ಸಾಜವಾದರು ಪಕ್ಷವಿದಿ ವ್ದ್ಯವಹುದು!”
“ಯಾವುದಾದರು ನಾಡದೇವಿಯೇ ನೀನು?”
“ಭಾವುಕರ ಕಂಗಳಿಗೆ ದೇವಿಯೇ ನಾನು”
“ಈಗ ಬಂದಿಹುದೇಕೆ ಏನು ಬೆಸನ?”
“ಯೋಗವಿಲ್ಲದೆ ತಿಳಿಯದೆನ್ನ ವ್ಯಸನ”
“ಹಾದಿ ಯಾವುದು ಹೇಳು, ಯಾವ ಯೋಗ?”
“ಆದಿ ಅಂತವು ಇಲ್ಲದಂಥ ತ್ಯಾಗ”
“ಬೇಡ ಬಂದಿಹೆಯೇನು ಏನಾದರೊಂದು?”
“ಬೇಡಿದರೆ ಬೇಡಿದುದ ಕೊಡುವೆಯಾ ಇಂದು?”
“ಅಹುದು ಕೊಡುವೆನು ಎಂದು ನಾನೆನ್ನಬಹುದೇ?”
ಬಹುದು-ಗಿಹುದಿನ ಶಂಕಿ ವೀರನಹುದೇ?”
“ಹಿಂಜರಿವ ಅಂಜಿಕೆಯು ಹಿಡಿದಿಹುದು ಕೈಯ”
“ಮುಂಜರಿವ ಹುರುಪಿನೊಡ ಮುಂದೆ ಬಾರಯ್ಯ!”
“ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ”
ಬಲ್ಲವರು ದೈವವನು ಪರಿಕಿಸುವರೊಮ್ಮೆ!”
“ಚಂಡಿ ಚಾಮುಂಡಿ ಕೇಳ್ ಬೇಕಾದುದೇನು?”
“ಗಂಡುಸಾದರೆ ನಿನ್ನ ಬಲಿ ಕೊಡೂವೆಯೇನು?”
ಮನವು ನಡುಗಿತು ತನುವು ನವಿರಿಗೊಳಗಾಯ್ತು
ನೆನವು ನುಗ್ಗಿತು — ಹೊರಗೆ ಕಂಡೆ — ಬೆಳಗಾಯ್ತು